Saturday 12 January 2008

ವಾತ್ಸಾಯನರೂರಿನಲ್ಲಿ ಐದು ರಾತ್ರಿ - ೫

ರಾತ್ರಿ ೫ - ಸ್ನೇಹ ಸಿ೦ಚನ

ಮು೦ಜಾನೆ ಮತ್ತೆ conference. ಒ೦ದೆರಡು ಪ್ರಬ೦ಧಗಳನ್ನು ಕೇಳಿ ಹೊರಬ೦ದೆ. ಹಳೆಯ ಗುರುಗೊಳಬ್ಬರು ಸಿಕ್ಕರು. ಜೀವನದಲ್ಲೂ, ವಿದ್ಯೆಯಲ್ಲೂ ಅನುಭವಿಗಳು. ಮಾತಿಗೆ ಸಿಕ್ಕಿದ್ದು ಒಳ್ಳೆಯದೇ ಆಯ್ತು. ಇಬ್ಬರೂ ವ್ಯಾನ್ ಗೊಹ್ ಮ್ಯುಸಿಯ೦ನತ್ತ ಹೊರಟೆವು.

ವಿನ್ಸೆ೦ಟ್ ವ್ಯಾನ್ ಗೊಹ್ ತು೦ಬಾ ವಿಚಿತ್ರ ವ್ಯಕ್ತಿ. ತನ್ನ ಮೂವತ್ತೆಳನೇ ವಯಸ್ಸಿಗೆ ತನ್ನನು ತಾನು ಕೊ೦ದುಕೊ೦ಡ. ಅವನ ಸಾವಿನ ನ೦ತರ, ಅವನ ಅಣ್ಣ ಅತ್ತಿಗೆಯ ಪ್ರಯತ್ನದಿ೦ದ ಅವನು ಪ್ರಸಿದ್ದಿಗೆ ಬ೦ದದ್ದು. ಅವನ ಬಣ್ಣಗಳ ಬಳಕೆ ನೋಡುವವರಿಗೇ ಹುಚ್ಚು ಹಿಡಿಸುತ್ತೆ. ಅವನ ಅತ್ಯ೦ತ ಪ್ರಸಿದ್ದವಾದ ಸೂರ್ಯಕಾ೦ತಿ ಹೂ ಗುಛ್ಛದ ನಕಲೊ೦ದನ್ನು ಖರೀದಿಸಿದೆ.

ಅಲ್ಲಿಯೇ ಪಕ್ಕದಲ್ಲಿದ್ದ, ವಜ್ರದ ಮ್ಯುಸಿಯ೦ಗೂ ನುಗ್ಗಿದೆವು. ಇಲ್ಲಿನವರು ವಜ್ರದ ಕಸುಬಿನಲ್ಲಿ ನುರಿತವರು. ಕೊಹಿನೂರಿಗೂ ಹೊಳಪಿಟ್ಟಿದ್ದು ಇವರೇ ಅ೦ತೆ. ನನ್ನ ಗುರುಗಳು ಅವರ ಹೆ೦ಡತಿಗೆ ಸ್ವರೋಸ್ಕಿ ಹರಳಿನ ಹಾರವೊ೦ದನ್ನು ತೆಗೆದುಕೊ೦ಡರು. ನಾನು ಸುಮ್ಮನೆ ಎಲ್ಲವನ್ನೂ ನೋಡಿದೆ. ಅವರೂ ಅನುಭವಿಗಳು. ನನ್ನನ್ನೇನೂ ಕೇಳಲಿಲ್ಲ.

ಸ೦ಜೆ, ಗು೦ಪಿನೊಟ್ಟಿಗೆ ಊಟಕ್ಕೆ ಹೊರಟೆ. ಹೊಸ ಪರಿಚಯದ ಹಲವು ಜನ. ಎರಡನೇ, ಮೂರನೇ ಪ್ರಶ್ನೆಯೇ ಸ೦ಸಾರದ ಕಥೆ. ಅವರವರ ಹೆ೦ಡತಿ ಮಕ್ಕಳ ಬಗ್ಗೆ ಹೇಳಿಕೊಳ್ಳುವದು ಅಭಿಮಾನದ ವಿಷಯ ಅಲ್ಲವೇ? ನಾನು ಏನು ಹೇಳಿಕೊಳ್ಳಲಿ?

ದೇವರನ್ನೇ ನ೦ಬದ, ಎಲ್ಲಾ ತರದ ಜನರನ್ನೂ ಒಪ್ಪಿಕೊ೦ಡಿರುವ, ಕಳ೦ಕ ಎ೦ದು ಬೇರೆಯವರು ತಿಳಿದಿದ್ದನ್ನೂ ಅನಿವಾರ್ಯತೆ ಎ೦ದು ಒಪ್ಪಿಕೊ೦ಡು ಮೆರೆಸುತ್ತಿರುವ ಮುಕ್ತ ಸಮಾಜದ ನೆಲದಲ್ಲಿ ಕುಳಿತೂ ಈ ಪ್ರಶ್ನೆ? ನನಗೇ ನಗು ಬ೦ತು.

ಈ ಭಾವನೆಗಳಿಗೆ ರೂಪ-ಆಕಾರ ಕೊಟ್ಟು ಭಾಷೆಯ ಚೌಕಟ್ಟಿನಲ್ಲಿ ಕಟ್ಟಿಟ್ಟರೆ ಅದೇ ಕಥೆಯಲ್ಲವೇ?

--------
ಆರನೆಯ ದಿನ ಬೆಳಗ್ಗೆ conferenceನ ಕೊನೆಯ ದಿನದ ಪ್ರಬ೦ಧಗಳನ್ನೆಲ್ಲ ತಲೆಗೆ ತು೦ಬಿಕೊ೦ಡು, ಗು೦ಜಿಸಿದ್ದ ಬ್ಯಾಗ್‌ಗಳಲ್ಲಿ ದೊರಕಿದ್ದ ಗಿಫ್ಟ್‌ಗಳನ್ನೂ, ಕೊ೦ಡುಕೊ೦ಡಿದ್ದ ಪೈ೦ಟಿ೦ಗ್‌ಗಳನ್ನು ತು೦ಬಿಕೊ೦ಡು ಆಮ್ಸ್ಟೆರ್ಡಾಮ್‌ಗೆ ಬೈ-ಬೈ ಹೇಳಿ ಮತ್ತೆ ಮನೆಯತ್ತ ಪಯಣ ಆರ೦ಭಿಸಿದೆ. ರ್‍ಐಕ್ ಮ್ಯುಸಿಯ೦ನಲ್ಲಿದ್ದ ಕ್ಯೂಪಿಡ್ (ಗ್ರ್‍ಈಕರ ಕಾಮದೇವ!)ನ ಅಮೃತಶಿಲೆಯ ಮೂರ್ತಿಯ ಕೆಳಗೆ ಬರೆದಿದ್ದ ಸಾಲುಗಳು ಇನ್ನೂ ಮನಸ್ಸನ್ನು ಬಿಡುತ್ತಿಲ್ಲ. He is your master. That he was, he is and and he will be. ಎಲ್ಲಾ ಕಾಲಕ್ಕೂ ಸತ್ಯ. ಅಲ್ಲವೇ?

1 comment:

Shree said...

I felt involving Vatsayana into this is a bit unfair to him :D

Surprisingly, I had never read this set of posts till now - very interesting thoughts and fluid writeup. I wonder why you stopped blogging after Michael Jackson's demise ;)

On an unrelated note, our own 'local' Proudhadevaraya also had a go at some similar 'research' (Ratiratnapradeepika), since he had nothing better to do (this is his only claim to fame). Interestingly, an engineering college in Hospet is named after him - I just hope there is no connection implied.